page1

Pages

Wednesday, March 28, 2012

ಬದುಕು ಎಂಬ ಮಾಯೆ

ಏನನ್ನೋ ಗೀಚುವುದರ ಬದಲು ಸುಮ್ಮನ್ನಿದ್ದು ಖಾಲಿ ಹಾಳೆಯ ಮರ್ಯಾದೆ ಉಳಿಸುವುದು ಮೇಲು ಎಂದೆನಿಸಿತ್ತು..ಹಾಗಾಗಿ ಕಳೆದ ಆರು ತಿಂಗಳಿನಿಂದ ಒಂದು ಅಕ್ಷರ ಕೂಡ ಹುಟ್ಟಲಿಲ್ಲ .. ಹುಟ್ಟಿದ್ದು ಈ ಬ್ಲಾಗ್ ಪುಟ ಸೇರಲಿಲ್ಲ...

ಅರ್ಥವಿಲ್ಲದ ವ್ಯರ್ಥಪ್ರಲಾಪದ ಮಾತುಗಳನ್ನು ಬರಿದೇ ಪೋಣಿಸುತ್ತಾ ಹೋದರೆ ನನ್ನೂರಿನಿಂದ ರಾಜಧಾನಿ ತಲುಪಬಹುದಿತ್ತು. ಅಲ್ಲಿಂದ ಮತ್ತೆ ವೆಬ್ ಪುಟ ಸೇರಿ ಎಲ್ಲೆಡೆ ಹರಡಬಹುದಿತ್ತು. ಆದರೆ, ಯಾಕೋ ಏನನ್ನೂ ಬರೆಯುವ ಮನಸ್ಥಿತಿ ನನ್ನಲಿರಲಿಲ್ಲ. ನನಗ್ಯಾವ ಕಾಯಿಲೆಯೂ ಬಂದಿರಲಿಲ್ಲ ಎಂದರೆ ಅದು ದೈಹಿಕ ಯಾತನೆಯ ಬಗ್ಗೆ ಮಾತ್ರ ಹೇಳಿದ್ದಂತಾಗುತ್ತದೆ.

ಮಾನಸಿಕವಾಗಿ ಕಳೆದ ಆರು ತಿಂಗಳಿನಲ್ಲಿ ಸಾಕಷ್ಟು ಜರ್ಝರಿತಗೊಂಡಿದ್ದೇನೆ. ಎಂದೂ ಅಳದ ಕೂಸಿನ ಕಣ್ಣಲ್ಲಿ ನಾಲ್ಕು ಹನಿ ಕಂಡ ಅಪ್ಪ ಕೂಡಾ ಕೊಂಚ ಗಾಬರಿಯಾಗಿದ್ದರು. ಆಪ್ತರ ಅಗಲಿಕೆಯ ನೋವಿನಲ್ಲಿದ್ದ ನಾನು.. ನಾನು ನಾನಾಗಿ ಮತ್ತೆ ರೂಪುಗೊಳ್ಳಲು ಎರಡು ಋತುಗಳೇ ಬೇಕಾಯಿತು..

ಏನಾಗಿತ್ತು ನನಗೆ? ನಾನ್ಯಾಕೆ ಎಲ್ಲವನ್ನು ತೊರೆದರೂ ಎಲ್ಲವನ್ನು ನನ್ನದೆಂಬಂತೆ ಆಡಿ ಅಪಹಾಸ್ಯಕ್ಕೀಡಾದೆ ಗೊತ್ತಿಲ್ಲ...